Tuesday, July 17, 2012

Sunday, July 8, 2012

ಕನ್ನಡ ಶುಭಾಶಯಗಳು

 ಹುಟ್ಟು ಹಬ್ಬದ ಶುಭಾಶಯಗಳು

ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.

ನೀಲಿ ಬಾನಿಂದ ನಿನ್ನೆಡೆಗೆ ಬರುವ ಪ್ರತಿಯೊಂದು ಸೂರ್ಯ ರಶ್ಮಿಯೂ ನಿನ್ನ  ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಆ ಭಗವಂತ ನಿಮಗೆ ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಆಶಿಸುತ್ತಾ... ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.

ಆ ಭಗವಂತ ನಿನಗೆ ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸುತ್ತಾ... ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುವೆ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿಮ್ಮ ಹೃದಯ ಬಯಸಿದ್ದು ನಿಮಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀವು ಹೀಗೆ ನಗು ನಗುತಾಯಿರಲಿ ಎಂದು ಹಾರೈಸುವೆ...

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿನ್ನ  ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀನು ನಗು ನಗುತಾಯಿರಲಿ ಎಂದು ಹಾರೈಸುವೆ...
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ  ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ.
ಈ ಹೊಸ ವರ್ಷವೂ ಕೂಡ ನಿನಗೆ ಆನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುವೆ,
ಹುಟ್ಟು ಹಬ್ಬದ ಶುಭಾಶಯಗಳು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಶುಭಾಶಯಗಳನ್ನು ಕೋರುವೆ.

ನೀ ನಡೆವ ಪ್ರತಿ ದಾರಿಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುವೆ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಧೀರ್ಘಾಯುಷ್ಯಮಾನಭವ, ಸದಾ ಸುಖಿಯಾಗಿರು ಹುಟ್ಟು ಹಬ್ಬದ ಶುಭಾಷಯಗಳು.
ಧೀರ್ಘಾಯುಷಿಯಾಗಿರು, ಸದಾ ಸುಖವಾಗಿರು, ಜನುಮ ದಿನದ ಹಾರ್ದಿಕ ಶುಭಾಷಯಗಳು. 
ಧೀರ್ಘಾಯುಷಿಯಾಗಿರಿ, ಸದಾ ಆನಂದದ ಹೊನಲಾಗಿರಿ, ಜನುಮ ದಿನದ ಹಾರ್ದಿಕ ಶುಭಾಷಯಗಳು.    

ಧಾರ್ಮಿಕ ಹಬ್ಬಗಳ ಶುಭಾಶಯಗಳು

ನವ ಸಂವತ್ಸರದ ಆಗಮನದ ಈ ಶುಭ ಸಮಯವು ಹೊಸ ಚಿಗುರು ಮೂಡೋ ಸಮಯ, ಹುಳಿ ಮಾವು ಸಿಹಿಯಾಗಿ ಮಾಗೋ ಸಮಯ. ಪ್ರಕೃತಿಯಲ್ಲಿ ಒಂದು ನವೀನ ಚೈತನ್ಯ ತುಂಬುವ ಇಂತಹ ಈ ಶುಭ ಘಳಿಗೆಯಲ್ಲಿ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುವೆ. ಬೇವು-ಬೆಲ್ಲಗಳನ್ನು ಸಮನಾಗಿ ಸವಿದಂತೆ ಜೀವನದ ಕಷ್ಟ-ಸುಖ, ನೋವು-ನಲಿವುಗಳನ್ನು ಸಮನಾಗಿ ಸ್ವೀಕರಿಸೊಣ. ಸರ್ವರಿಗೂ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ.    


~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಬೇವು-ಬೆಲ್ಲ ಎರಡನ್ನೂ ಸಮನಾಗಿ ಸ್ವೀಕರಿಸುತ್ತಾ ಹೊಸ ಸಂವತ್ಸರವ ಸ್ವಾಗತಿಸೋಣ, ಯುಗಾದಿಯ ಹಾರ್ದಿಕ ಶುಭಾಶಯಗಳು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸೂರ್ಯನು ಮತ್ತೆ ತನ್ನ ಪಥ ಬದಲಿಸಿದ್ದಾನೆ, ಚುಮು ಚುಮು ಚಳಿ ಸರಿದು, ಬೆಚ್ಚನೆ ಸುಗ್ಗಿಯ ಆಗಮನದ ಗಾಳಿ ಬೀಸುತಿದೆ. ಸುಗ್ಗಿಗೆ ಸಿದ್ದರಾಗುವ ಮುಂಚೆ ಎಳ್ಳು-ಬೆಲ್ಲ ತಿಂದು, ಎಲ್ಲರಿಗೂ ತಿನಿಸಿ, ಎಳ್ಳು ಬೆಲ್ಲದ ಸಿಹಿಯನು ಸವಿಯುತಾ, ಸಿಹಿಯಾದ ಬಾಯಿಯಿಂದ, ಸಿಹಿಯಾದ ಮಾತುಗಳನ್ನಾಡೋಣ. ಸರ್ವರಿಗೂ ಮಕರ ಸಂಕ್ರಾತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಬಾಳು ಎಳ್ಳು-ಬೆಲ್ಲದಂತೆ ಸವಿಯಾಗಿ ಸೋಗಸಾಗಿರಲಿ ಎಂದು ಆಶಿಸುವೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಕಿರು ದಿನಗಳು ಮುಗಿದು, ದೀರ್ಘ ದಿನಗಳು ಬರುವ ಕಾಲ ಬಂದಿತು. ಸೂರ್ಯ ಮಕರ ರಾಶಿ ಪ್ರವೇಶಿಸುತ್ತಿದ್ದಾನೆ. ಎಳ್ಳು-ಬೆಲ್ಲಗಳೊಡನೆ ಹಬ್ಬ ಆಚರಿಸೋಣ. ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.  
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ಆ ದುರ್ಗಾ  ಮಾತೆ ಎಲ್ಲರಿಗೂ ಸುಖ ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಿ ಎಲ್ಲರ ಬಾಳು ಬಂಗಾರವಾಗಲಿ ಎಂದು ಹಾರೈಸುವೆ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೀಪಗಳ ಈ ಹಬ್ಬ ಎಲ್ಲರ ಬಾಳನ್ನು ಬೆಳಗಿ ಸಂತೋಷ, ಸಂಭ್ರಮ ಮತ್ತು ಸಂವೃದ್ಧಿಯನ್ನು ತರಲಿ ಎಂದು ತುಂಬು ಹೃದಯದಿಂದ ಹಾರೈಸುವೆ... :-)

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಸರ್ವರಿಗೂ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ರಾಮನ ಪಿತೃವಾಕ್ಯ ಪರಿಪಾಲನೆ, ಶಿಷ್ಟರ ರಕ್ಷಣೆ, ರಾಜಧರ್ಮ ನಿಷ್ಥೆ ಈ ಎಲ್ಲ ಸದ್ಗುಣಗಳನ್ನು ಎಲ್ಲರೂ ಅನುಸರಿಸುವಂತಾಗಲಿ, ಶುಭವಾಗಲಿ. 


ಬೀಳ್ಕೊಡುಗೆ ಶುಭಾಶಯಗಳು

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಹೋಗಿ ಬನ್ನಿ ಅಂತ ಹೇಳಲ್ಲಾ, ಮತ್ತೆ ಸಿಗೋಣಾ ಅಂತ ಆಶಿಸುವೆ. ಶುಭವಾಗಲಿ. 
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ದಾಂಪತ್ಯಕ್ಕೆ ಶುಭಾಶಯಗಳು



ದಾಂಪತ್ಯ ಜೀವನಕ್ಕೆ ಶುಭಾಶಯಗಳು
ನೂರಾರು ವರುಷ ನೀವು ಜೊತೆ ಜೊತೆಯಾಗಿ ನಗು ನಗುತಾಯಿರಿ ಎಂದು ಹಾರೈಸುವೆ ....


~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಬ್ರಹ್ಮಚರ್ಯದಿಂದ ಗೃಹಸ್ತಾಶ್ರಮಕ್ಕೆ ಕಾಲಿಡುತ್ತಿರುವ ಈ ಸುಮುಹೊರ್ತದಲ್ಲಿ ನಿಮ್ಮ ಮುಂಬರುವ ಸಂಸಾರವು, ಸುಖ ಸಾಗರವಾಗಲಿ ಎಂದು ಹಾರೈಸುವೆ. ದಾಂಪತ್ಯ ಜೀವನಕ್ಕೆ ಶುಭಾಶಯಗಳು.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನಿಶ್ಚಿತಾರ್ಥದ ಶುಭಾಶಯಗಳು... ಬೇಗನೆ ಹೋಳಿಗೆ ಊಟದ ವ್ಯವ್ಯಸ್ಥೆ ಮಾಡಿರಿ... ;-)




Tuesday, June 12, 2012

ಪುರಾಣ

ಪುರಾಣ ಅಥವಾ ಪೌರಾಣಿಕ ಕಥೆಗಳು ಜನಪದ ಕಥೆಗಳ ಹಾಗೆ. ಅವುಗಳನ್ನು ಮೂಲತ: ವ್ಯಾಸ, ವಾಲ್ಮೀಕಿ ಮುಂತಾದ ಮಹರ್ಷಿಗಳು ಬರೆದರು ಅಂತ ಹೇಳುವರು, ಆದರೆ ಅವರು ಅವುಗಳನ್ನು ಸತ್ಯ ಸಂಗತಿಗಳನ್ನು ಆಧರಿಸಿ ಬರೆದರೋ ಅಥವಾ ಕಲ್ಪಿಸಿಕೊಂಡು ಬರೆದರೋ ಕಂಡವರಾರು?  ಹೇಗೆ ಜನಪದ ರಚನೆಗಳಿಗೆ ಆಧಾರವಿಲ್ಲವೋ ಹಾಗೆಯೇ ಪುರಾಣಗಳಿಗೆ ದಾಖಲೆಗಳಿಲ್ಲ, ದಾಖಲೆಗಳು ಬೇಕಾಗಿಯೂ ಇಲ್ಲ. ಹಾಗೆ ದಾಖಲೆ, ಪುರಾವೆ ಹುಡುಕಲಿಕ್ಕೆ ಪುರಾಣವು ಚರಿತ್ರೆಯಲ್ಲ. ಚರಿತ್ರೆ ಮತ್ತು ಪುರಾಣಗಳಿಗೆ ಇರುವ ವ್ಯತ್ಯಾಸವೇ ಅದು. ಅದಕ್ಕೆ ನಮ್ಮ ಹಿರಿಯರು ಅವನ್ನು ಪುರಾಣಯೆಂದಿರುವದು. ಪುರಾಣದ ಸತ್ಯಾಸತ್ಯತೆ ಚರ್ಚಿಸುವದೂ ತರವಲ್ಲ. ರಾಮ ಕೃಷ್ಣ ನಿಜವಾಗಿಯೂ ಇದ್ದರೆ? ರಾಮಾಯಣ, ಮಹಾಭಾರತ ನಿಜವಾಗಿಯೂ ಘಟಿಸಿತೆ? ರಾಮ ಸೇತು, ದ್ವಾರಕಾ ನಗರಿ ಅಸ್ತಿತ್ವ ನಿಜವೇ? ಎಂದೆಲ್ಲಾ  ಪ್ರಶ್ನಿಸುವದು ಸರಿಯಲ್ಲ. ರಾಮನ ನೀತಿ ಪಾಲನೆ, ಕೃಷ್ಣನ ಧರ್ಮ ಬೋಧನೆ, ಹರಿಶ್ಚಂದ್ರನ ಸತ್ಯ ನಿಷ್ಠಯಲ್ಲಿ ನಮಗೆ ವಿಶ್ವಾಸವಿರಬೇಕು.

ರಾಮ-ಲಕ್ಷ್ಮಣ, ಕೃಷ್ಣ-ಅರ್ಜುನ, ವಿಶ್ವಾಮಿತ್ರ-ಮೇನಕೆ ಇಮರೆಲ್ಲ ನಿಜವಾಗಿಯೂ ನಮ್ಮ ನೆಲದ ಮೇಲೆ ನಡೆದಾಡಿದರೆ? ಅವರ ಪವಾಡಗಳು, ಮಹಿಮೆಗಳು ನಿಜವೇ? ಕನಕನಿಗೊಸ್ಕರ ಶ್ರೀ ಕೃಷ್ಣ ಪರಮಾತ್ಮ ನಿಜವಾಗಿಯೂ ದರ್ಶನ ಕೊಟ್ಟನೆ? ಜ್ಞಾನದೇವ ಗೋಡೆಯನ್ನು ಹೇಗೆ ಚಲಿಸುವಂತೆ ಮಾಡಿದ? ಎನ್ನುವ ಚರ್ಚೆ ಅನವಶ್ಯ.

ರಾಮ ತನ್ನ ಸಂಕುಚಿತ ಸ್ವಭಾವದಿಂದ ಸೀತೆಯ ಪಾವಿತ್ರ್ಯತೆಯನ್ನು ಅಗ್ನಿಪರಿಕ್ಷೆಗೆ ಏಕೆ ಗುರಿಪಡಿಸಿದನು ಅನ್ನುದವಕ್ಕಿಂತ ಸೀತೆಯ ಪಾವಿತ್ರ್ಯತೆಯನ್ನು ಅಗ್ನಿ ಕೂಡ ಸುಡಲಿಲ್ಲ ಎನ್ನುವದು ಮುಖ್ಯ ಸಂದೆಶವಾಗಬೇಕು. ಕೃಷ್ಣನು ಹದಿನಾರು ಸಾವಿರ ಹೆಂಗಳೆಯರ ಜೊತೆ ಸರಸ ಸಲ್ಲಾಪವಾಡಿದನು ಅನ್ನುವದಕ್ಕಿಂತ ಅಷ್ಟೂ ಮಹಿಳೆಯರನ್ನು ಸೆರೆಯಿಂದ ಬಂಧ ಮುಕ್ತಗೊಳಿಸಿ ಆಶ್ರಯ ನೀಡಿದ ಎನ್ನುವದನ್ನು ಗಮನಿಸಬೇಕು. ತ್ರಿಶಂಕು ಮಹಾರಾಜನು ಸ್ವರ್ಗವು ಇಲ್ಲದೆ ಭೂಮಿಯೂ ಇಲ್ಲದೆ ಮಧ್ಯದಲ್ಲಿ ಅಬ್ಬೆಪಾರಿಯಾದ ಎಂದು ಅಣುಕಿಸುತ್ತ 'ತ್ರಿಶಂಕು ಸ್ತಿತಿ' ಎಂಬ ವಿಷೆಶಾರ್ಥ ಪದಗಳನ್ನು ಸೃಷ್ಟಿಸುವ ಬದಲಿ, ವಿಶ್ವಾಮಿತ್ರನು  ತಂದೆಗೊಸ್ಕರ ಸ್ವರ್ಗವನ್ನೇ ಸೃಷ್ಟಿಸಿದ ಸಾಹಸವನ್ನು ಅನುಸರಿಸಬೇಕು.

ಹೇಗೆ ನಾವು ತೆನಾಲಿ ರಾಮ ಮತ್ತು ಬೀರಬಲ್ ರ ಕಥೆಗಳನ್ನು ಕೇಳಿ ತಿಳಿದು ಮನರಂಜನೆಗೋಸ್ಕರ ನಂಬಿ ಆನಂದಿಸುತ್ತೆವೋ ಹಾಗೆಯೇ ಪೌರಾಣಿಕ ಕಥೆಗಳನ್ನು ಆಧ್ಯಾತ್ಮಗೋಸ್ಕರ ಅರ್ಥೈಸಿಕೊಂಡು ನಿತ್ಯ ಜೀವನದ ಸನ್ ನಡತೆಗೋಸ್ಕರ ವಿಶ್ವಾಸವಿಟ್ಟು ಅನುಸರಿಸಬೆಕು. ಪುರಾಣ ಕಥೆಗಳನ್ನು ಋಣಾತ್ಮಕ ಭಾವನೆಯಿಂದ ನೋಡುವ ಬದಲಿ ಅದರ ಧನಾತ್ಮಕ ಅಂಶಗಳನ್ನು ಅರಿತು ಅನುಸರಿಸಬೇಕು. ಪುರಾಣಗಳು ನಮ್ಮ ಮನ ಶುಧ್ಧಿಗೋಸ್ಕರ ರಚಿತವಾದ ಕೃತಿಗಳು, ದಿಕ್ಕು ತಪ್ಪಿದ ಮನಸ್ಸಿಗೆ ದಾರಿ ತೋರಿಸವ ದಾರಿದೀಪಗಳು, ಸನ್ಮಾರ್ಗದೆಡೆಗೆ ನಡೆಸೋ ದೀವಟಿಗೆಗಳು, ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸೋ ಜ್ಯೋತಿಗಳು.