Wednesday, January 30, 2013

ಬೇಂದ್ರೆಯವರ ಜನುಮ ದಿನದ ಸ್ಮರಣಾರ್ಥ

ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೊಯ್ದ, ದೇವನು ಜಗವೆಲ್ಲ ತೊಯ್ದ
ಎಲೆಗಳ ಮೆಲೆ, ಹೂಗಳ ಒಳಗೆ
ಅಮೃತದಾ ಬಿಂದು, ಕಂಡವು ಅಮೃತದಾ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದ ತಂದು
ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳಾ ಹಾಡು
ಹೊರಟಿತು, ಹಕ್ಕಿಗಳಾ ಹಾಡು
ಗಂಧರ್ವರ ಸೀಮೆಯಾಯಿತು, ಕಾಡಿನಾ ನಾಡು
ಕ್ಷಣದೊಳು, ಕಾಡಿನಾ ನಾಡು 

Monday, January 28, 2013

ಭಯೋತ್ಪಾದಕ ಎಂದ ಸಂಸದ

ಜವಾಬ್ದಾರಿಯುತ ಹುದ್ದೆಯಾದ ಕೇಂದ್ರ ಗೃಹ ಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಶಿಂಧೆಯವರ ಹೇಳಿಕೆಯನ್ನು ಖಂಡಿಸುತ್ತೇನೆ. ಅವರು ತಮ್ಮ ಸ್ಥಾನಕ್ಕೆ ಗೌರವ ಕೊಟ್ಟು, ಸರ್ವ ಧರ್ಮಗಳು ಸಮ ಎಂದು ಭಾವಿಸಿ, ಸಮಾಜದಲ್ಲಿ ಸಮರಸ ಸಮನ್ವಯ ಬೆಳೆಸಲಿ. ಇಂತಹ ಕೀಳುಮಟ್ಟದ ಹೆಳಿಕೆಕೊಡದೆ, ಭಾರತದ ಶಾಂತಿಯನ್ನು ಕದಡದಂತೆ ನಡೆದುಕೊಳ್ಳಲಿ. ಅವರ ಈ ಹೇಳಿಕೆಯನ್ನು ಸ್ವತ: ಕಾಂಗ್ರೆಸ್ ಮುಖಂಡರೆ ಸ್ವಾಗತಿಸಿಲ್ಲ, ಈ ಬಗ್ಗೆ ಪ್ರತಿಕ್ರಿಯೆ ಕೊಡಲು ಹಿರಿಯ ಕಾಂಗ್ರಸ್ಸಿಗರು ನಿರಾಕರಿಸಿದ್ದಾರೆ. ನಾವು ವಯಸ್ಸು ಮತ್ತು ಅನುಭವದಲ್ಲಿ ಅವರಿಗಿಂತ ಚಿಕ್ಕವರಾದುದರಿಂದ, ಈ ಸಲಹೆಯನ್ನು ಅವರಿಗೆ ಗೌರವದಿಂದ ಕೊಡಲು ಬಯಸುತ್ತೇವೆ. ಬಂಧಿಯಾಗಿರುವ ಭಯೋತ್ಪಾದಕರಿಗೆ ಮರಣ ದಂಡ ಶಿಕ್ಷೆಯಾದರೂ ಕೂಡ ಅಂತಹ ಅಪರಾಧಿಗೆ ಗಲ್ಲಿಗೆರಿಸದೆ ಮತ ಬ್ಯಾಂಕ್ ಗೋಸ್ಕರ ತುಚ್ಚ ರಾಜಕೀಯ ನಡೆಸುತ್ತಿರುವ ಇಂತಹ ನಾಯಕರಿಗೆ  ನಮ್ಮ ಧಿಕ್ಕಾರವಿದೆ. ಭಾರತದ ಅಭ್ಯುದಯಕ್ಕೆ ರಾಷ್ಟೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷದ ಸೇವೆ ಎಷ್ಟು, ಏನು, ಹೇಗೆ  ಎಂದು ಎಲ್ಲರಿಗೂ ಗೊತ್ತು. ಸೋನಿಯಾರ  ಮೆಚ್ಚುಗೆಗಳಿಸಲು ವಿವೇಕವಿಲ್ಲದೆ, ಅದೂ ಕೂಡ ಪ್ರಧಾನಿಯ ಸಮ್ಮುಖದಲ್ಲೇ ಮೂರ್ಖರಂತೆ, ಹಿಂದೂ ವಿರೋಧಿ ಹೇಳಿಕೆಕೊಡುವದು ನಾಚಿಕೆಗೇಡು ಸಂಗತಿ. ಇಂತಹ ನಡವಳಿಕೆ ಇವರಿಗೆ ಶೋಭೆತರದು. ತಮ್ಮ ಮಾತನ್ನು ಹಿಂದೆ ತೆಗೆದುಕೊಳ್ಳಲಿ ಮತ್ತು ಹಿಂದೂ ಸಂಘಟನೆಯ ಕ್ಷಮೆಯಾಚಿಸಿಲಿ.