Tuesday, June 19, 2018

As I Grew Older - ನಾ ಬೆಳೆದಂತೆ

Poem - As I Grew Older

It was a long time ago.
I have almost forgotten my dream.
But it was there then,
In front of me,
Bright like a sun—
My dream.
And then the wall rose,
Rose slowly,
Slowly,
Between me and my dream.
Rose until it touched the sky—
The wall.
Shadow.
I am black.
I lie down in the shadow.
No longer the light of my dream before me,
Above me.
Only the thick wall.
Only the shadow.
My hands!
My dark hands!
Break through the wall!
Find my dream!
Help me to shatter this darkness,
To smash this night,
To break this shadow
Into a thousand lights of sun,
Into a thousand whirling dreams
Of sun!

by Langston Hughes

ನಾ ಬೆಳೆದಂತೆ

ಬಲು ದಿನಗಳ ಹಿಂದೆ ನಾ ಕಂಡ ಕನಸು,
ಪ್ರಾಯಶಃ ಈಗ ಮರೆತಂತೆಯೇ ಆಗಿದೆ.
ಆದರೆ ಆಗ ಕಣ್ಣ ಮುಂದೆಯೇ ನಡೆದಂತೆ ಇತ್ತು.
ಸೂರ್ಯನಷ್ಟೇ ಸ್ಪಷ್ಟ ಸತ್ಯ- ನನ್ನ ಕನಸು.

ನಂತರ ಗೋಡೆಯೊಂದ್ದೆದಿತು .
ಮೆಲ್ಲ ಮೆಲ್ಲನೆ ಮೇಲೆರಿತು,
ಆಗಸದೆತ್ತರಕ್ಕೆ ಬೆಳೆಯಿತು
ನನ್ನ ಮತ್ತು ನನ್ನ ಕನಸಿನ ಮಧ್ಯೆ;
ಅಡ್ಡ ನಿಂತಿತು - ಆ ಗೋಡೆ.

ಕರಿ ನೆರಳು. ನಾನೂ ಕರಿಯ.
ಆ ಕರಿ ನೆರಳಿನಲ್ಲೇ ನಾ ಮಲಗಿದೆ.
ನನ್ನ ಕನಸಿನ ಬೆಳಕು ನನ್ನ ಮುಂದಿಲ್ಲ,
ನನ್ನ ಕನಸಿನ ಹೊಳಪು ನನ್ನ ಮೇಲಿಲ್ಲ.
ಬರೀ ದಪ್ಪ ಗೋಡೆ. ಬರೀ ದಟ್ಟ ಕತ್ತಲೆ.

ನನ್ನ ಕೈಗಳೇ! ಓ ನನ್ನ ಕಪ್ಪು ಕೈಗಳೇ!
ಈ ಗೋಡೆಯನ್ನು ಒಡೆದುಹಾಕಿ!
ಆ ನನ್ನ ಕನಸನ್ನು ಹುಡುಕಿತನ್ನಿ!
ಈ ಕಗ್ಗತ್ತಲೆಯನ್ನು ಕಿತ್ತೆಸೆಯಲು ಕೈಹಾಕಿ!
ಈ ಕಾಳ ರಾತ್ರಿಯನು ಹೊಸಕಿಹಾಕಿ!
ಈ ಕರಿ ನೆರಳನ್ನು ಸೂರ್ಯನ ಸಾವಿರ ಬೆಳಕಾಗಿಸಿ,
ಪ್ರಜ್ವಲಿಸಿ ಬೆಳೆವ ಸಾವಿರ ಕನಸಾಗಿಸಿ!

~ಅನುವಾದ ಅಮಿತ ಬಿರಾದಾರ

Wednesday, May 30, 2018

सर्वेषु भूतेषु दया हि धर्मः|

To show kindness in all living beings is Dharma.

ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.

ಎಲ್ಲ ಕಾಲಕ್ಕೂ ಎಲ್ಲ ಕಡೆಯೂ ದಯಾಮಯಿಯಾಗಿರಲು ನಮಗೆ ಕಷ್ಟವಾಗಬಹುದು, ಆದರೆ, ಸದಾ ಶಾಕಾಹಾರಿಯಾಗಿ ಇರಲು ಪ್ರಯತ್ನಿಸಬಹುದಲ್ಲ. ನನ್ನ ಆಹಾರ ನನ್ನ ಇಚ್ಛೆ ಅಂತ ಮೊಂಡುತನ ತೋರಿಸುವುದರಲ್ಲಿ ಏನು ಜಾಣತನಯಿದೆ?

ಇನ್ನು ಶಾಕಾಹಾರಿಗಳಿಗೆ ಕೆಲವು ಜನ ಪ್ರಶ್ನೆ ಕೇಳುತ್ತಾರೆ, ನೀನು ತಿನ್ನುವ ಅಲೂಗಡ್ಡೆಯ ಚಿಪ್ಸ್, ಐಸ್ಕ್ರೀಮ್, ಚಾಕೊಲೆಟ್, ಕೇಕ್ ಗಳಲ್ಲಿ ಪ್ರಾಣಿಯ ಒಂದಲ್ಲ ಒಂದು ದೇಹದ ಅಂಶವಿದೆ, ನೀನು ಕೂಡ ಶುದ್ಧ ಶಾಕಾಹಾರಿಯಲ್ಲ. ನಿಜ ಈಗಿನ ಕಾಲದಲ್ಲಿ ಕಲಬೆರಕೆ ಅತೀ ಹೆಚ್ಚು. ನಾವು ಹೋಟೆಲ್, ಅಂಗಡಿಗಳಲ್ಲಿ ಖರೀದಿಸುವ ಯಾವುದೇ ಆಹಾರಕ್ಕೆ ರುಚಿ ಬರುವ ಸಲುವಾಗಿಯೋ, ಇಲ್ಲಾ ಮೃದುತ್ವ ಹೆಚ್ಚಾಗಲೋ, ಗಟ್ಟಿಯಾಗಿರಲೋ, ಇಲ್ಲಾ ಹೆಚ್ಚು ಕಾಲ ಬಾಳಿಕೆಬರಲೋ ಅಥವಾ ಗರಿಗರಿಯಾಗಿ ಇರುವಂತೆ ಮಾಡಲೋ ಇನ್ನೂ ಯಾವ್ಯಾವುದೋ ಕಾರಣಕ್ಕೆ ಕೆಲವು ಪದಾರ್ಥಗಳನ್ನು ಸೇರಿಸಿರುತ್ತಾರೆ. ಆ ಪದಾರ್ಥಗಳು ಹೇಗೆ ತಾಯಾರದವು ಅನ್ನುವದನ್ನು ಹುಡುಕುತ್ತ ಹೋಗಲು ನಮಗೆ ಯಾರಿಗೂ ಸಮಯವಿಲ್ಲ. ಎಲ್ಲರೂ ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನೇ ಅವಲಂಭಿಸಬೇಕು. ಆದರೂ ಕೆಲವು ಜನ ನಿಖರವಾಗಿ ಹೇಳುತ್ತಾರೆ ಅವುಗಳಲ್ಲಿ ಯಾವುದೋ ರೂಪದಲ್ಲಿ ಪ್ರಾಣಿಯ ದೇಹದ ಒಂದು  ಅಂಶವನ್ನು ಬೆರೆಸಿರುತ್ತಾರೆ ಅಂತ. ಅವರ ಮಾತು ಎಷ್ಟು ಸತ್ಯ ಎಷ್ಟು ಸುಳ್ಳು ಅಂತ ಪರಾಮರ್ಶಿಸಿ ವಾದ ಮಾಡುವದಕ್ಕಿಂತ ಅಂಥಹ ಆಹಾರಗಳನ್ನು ತ್ಯಜಿಸಿಬಿಡುವುದು ಸರಿಯಲ್ಲವೇ. ನಾವು ಕಾಣದ್ದು ಹೇಗೆ ಇದೆ ಅಂತ ನಾವು ಹೇಳಲು ಹೇಗೆ ಸಾಧ್ಯ? ನಮಗೆ ಗೊತ್ತಿರುವ ಅಥವಾ ಮನೆಯಲ್ಲಿ ಮಾಡಿದ ಆಹಾರ ಮಾತ್ರ ಸೇವಿಸಿ ಸಾಧ್ಯವಾದಷ್ಟು ಶಾಕಾಹಾರಿಯಾಗಿ ಇರಬಹುದಲ್ಲ. 

ನಮ್ಮ ಶಾಕಾಹಾರಿತನವನ್ನು ಜಂಭದಿಂದ ತೋರಿಸಿಕೊಳ್ಳುವ ಅಗತ್ಯತೆ ಯಾರಿಗೂ ಬೇಡ. ನಮ್ಮ ಮನಸಾಕ್ಷಿಗೆ ನಾವು ಶಾಕಾಹಾರಿಯಾದರೆ ಸಾಕು. 

ಕೊನೆಯ ಗುಳಿಗೆ -  ಕೆಲವು ಜನ ಈ ಯಪ್ಪ ಶಾಖಾಹಾರವನ್ನು ಪದೇ ಪದೇ  ಶಾಕಾಹಾರ ಅಂತ ತಪ್ಪಾಗಿ ಬರೆದಿದ್ದಾನಲ್ಲ ಅಂತ ಅಂದುಕೊಳ್ಳಬಹುದು. ಆದರೆ ನನಗಸಿನಿದ ಹಾಗೆ ಶಾಕಾಹಾರವೇ ಸರಿಯಾದ ಪದ. ಶಾಕ ಅಂದರೆ ಪಲ್ಲೆ, ತರಕಾರಿ. ಶಾಖ ಅಂದರೆ ಕಾವು. ಶಾಖಾಹಾರ ಪದ  ಅಪಭ್ರಂಶವಾಗಿ ಬಂತೋ ಇಲ್ಲಾ ಶಾಖ ಕೊಟ್ಟು ಬೇಯಿಸಿದ ಶಾಕಾಹಾರ ಶಾಖಾಹಾರವಾಯಿತೋ ಗೊತ್ತಿಲ್ಲ.

Saturday, January 13, 2018

ಸಾಫ್ಟವೇರ್ರೂ.... ಕನ್ನಡ ಪುಸ್ತಕಾನೂ...

ನಾನು ನಮ್ಮ ಊರಿಗೆ ಹೋಗಬೇಕಾದರೆ ಹೆಚ್ಚಾಗಿ ರೈಲಿನಲ್ಲೇ  ಪ್ರಯಾಣ ಮಾಡುವದು. ಅದರಿಂದ ನನಗೆ ಹಲವು ಲಾಭಗಳಿವೆ. ಕಡಿಮೆ ಖರ್ಚು, ಒಳ್ಳೆಯ ಗಾಳಿ ಬೆಳಕಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕಡಿಮೆ ಆಯಾಸ, ಮಲಗಲು ಅನುಕೂಲ, ಮನೆಯಿಂದ ತಂದ ಊಟವನ್ನು ಕುಳಿತುಕೊಂಡು ಆರಾಮಾಗಿ ಉಣ್ಣಬಹುದು ಮತ್ತು ಸರ್ಕಾರಿ ಸಂಸ್ಥೆಯಾದ್ದರಿಂದ ಯಾವಾಗಲೂ ಪ್ರಯಾಣದ ದರ ಒಂದೇ ಥರ. ಇದ್ದೆಲ್ಲಕ್ಕಿಂತ ಮುಖ್ಯವಾಗಿ ನಾನು ರೈಲು ಪ್ರಯಾಣ ಯಾಕೆ ಹೆಚ್ಚಾಗಿ ಇಷ್ಟಪದುವುದೆಂದರೆ, ಅದರಲ್ಲಿ ಕುಳಿತು ಆರಾಮವಾಗಿ ಯಾವುದಾದರು ಒಂದು ಕನ್ನಡ ಕಾದಂಬರಿಯನ್ನು ಓದುವ ಅವಕಾಶಕ್ಕಾಗಿ. ನಾನು ಓದಿದ ಅಷ್ಟು ಇಷ್ಟು ಪುಸ್ತಕಗಳು ಪ್ರಯಾಣ ಮಾಡುವಾಗಲೇ ಹೊರತು ಮನೆಯಲ್ಲಿ ಅಥವಾ ಇನ್ನೆಲ್ಲೋ ಏಕಾಂತದಲ್ಲಿ  ಹಾಯಾಗಿ ಕುಳಿತು ಓದಿದ್ದಲ್ಲ.  ಹೀಗೆ ಒಂದು ಸಾರಿ ನಾನು ಒಬ್ಬನೇ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದೆ. ಏಕಾಂಗಿ ಅಂದರೆ ಮನೆಯವರು ಯಾರು ಇಲ್ಲ ಅಂತ ಅಷ್ಟೇ ಅರ್ಥ ಆದರೆ ಅಂಥ ಸಮಯದಲ್ಲಿ ನಾನು ನನ್ನ ಜೊತೆಗಾರರಾಗಿ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತೇನೆ.  ಆಗ ಕಾರಂತರ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಎತ್ತಿಕೊಂಡು ಹೋಗಿದ್ದೆ. ನನ್ನ ಪಕ್ಕ ಕುಳಿತ ಒಬ್ಬ ಸಹ ಪ್ರಯಾಣಿಕರು ನನ್ನ ಜೊತೆ ಮಾತಿಗೆ ಇಳಿದರು. ಮುಂದಿನ ನಿಲ್ದಾಣ ಯಾವುದು? ಎಷ್ಟು ಸಮಯದ ಪ್ರಯಾಣವಿದು? ಅಂತೆಲ್ಲ ಮಾತಾಡಿದ ಮೇಲೆ ಅವರು ನಾನು ಕೈಯಲ್ಲಿ ಹಿಡಿದಿರುವ ಪುಸ್ತಕದ ಕಡೆಗೆ ಮಾತು ಹೊರಳಿಸಿದರು. "ಯಾವ ಪುಸ್ತಕ?" ಅಂದರು. ನಾನು ಅದರ ಮುಖಪುಟ ತೋರಿಸಿ, ಕಾರಂತರ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಅಂದೆ. ಅವರಿಗೆ ಕನಿಷ್ಠ ಕಾರಂತರ ಪರಿಚಯವಂತೂ ಇರಲೆಬೇಕು ಅಂದು ಕೊಂಡು ಸ್ವಲ್ಪ ಕಾರಂತರ ಬಗ್ಗೆ ಚರ್ಚಿಸೋಣ ಎಂದು ನಾನು ಯೋಚಿಸಿದ್ದೆ. ಯಾಕೆಂದರೆ ಇಂತಹ ಕೆಲವು ಚರ್ಚೆಗಳಲ್ಲೇ ಮುಂದೆ ಖರಿದಿಸುವ ಪುಸ್ತಕದ ಬಗ್ಗೆ ಅಥವಾ ಸಾಹಿತಿಯ ಬಗ್ಗೆ ಗೊತ್ತಾಗುವುದು.  ಆದರೆ ಆ ವ್ಯಕ್ತಿ ಕಾರಂತರು ಅಥವಾ ಸಾಹಿತ್ಯದ ಬಗ್ಗೆ ಏನನ್ನೂ ಕೇಳದೇ ನನ್ನ ಬಗ್ಗೆಯೇ ಕೇಳಿದರು 
"ಏನ ಕೆಲಸ ಮಾಡ್ತಿರಾ? ಟೀಚರ್ರಾ ನೀವು?" 
"ಅಲ್ಲಾ ಸಾಫ್ಟವೇರ್ ಇಂಜಿನಿಯರ್"
"ಮತ್ತೆ ಕನ್ನಡ ಪುಸ್ತಕ ಒದತಾಯಿದ್ದಿರಾ?"
ಆ ಕ್ಷಣ ನನಗೆ ಕೋಪ ಮತ್ತು ನಗು ಎರಡೂ ಬಂತು. ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುವವರು ಸಾಹಿತ್ಯದ ಪುಸ್ತಕಗಳನ್ನು ಓದುವುದಿಲ್ಲ ಅಂತ ಅವರ ಅಭಿಪ್ರಾಯವಾಗಿತ್ತು. ಅವರ ಮೇಲೆ ಕೋಪ ತೋರಿಸಿ ಏನು ಉಪಯೋಗ ಅಂದುಕೊಂಡು ಬರಿ ನಗು ಮಾತ್ರ ತೋರಿಸಿ "ಯಾಕೆ ಓದಬಾರದಾ?" ಅಂತ ಕೇಳಿದೆ.
ಅವರಿಗೆ ಸ್ವಲ್ಪ ತಬ್ಬಿಬ್ಬಾಯಿತು "ಅಲ್ಲಾ ಸಾಫ್ಟವೇರ್ ಅಂದ್ರಲ್ಲಾ ಅದಕ್ಕೇ .... " ಅಂತ ರಾಗ ಎಳೆದರು. ನಾನವರಿಗೆ ವಿವರಣೆ ಕೊಡುವ ಅವಶ್ಯಕತೆಯಿಲ್ಲ ಅನಿಸಿತು. ಆಮೇಲೆ ಅವರೂ ಮೌನಿಯಾದರು, ನಾನು ಕೂಡ ಪುಸ್ತಕದಲ್ಲಿ ಮತ್ತೆ ತಲೆ ತಗ್ಗಿಸಿದೆ.

ಈ ದುಡಿಯಬೇಕು, ದುಡಿದು ದುಡ್ಡು ತರಬೇಕು, ತಂದ ದುಡ್ಡಲ್ಲಿ ನನ್ನ ಮತ್ತು ಮನೆಯವರ ಹೊಟ್ಟೆ ತುಂಬಿಸಬೇಕು ಅನ್ನುವ ಜವಾಬ್ದಾರಿ ನನ್ನ ಮೇಲೆ ಇರದಿದ್ದರೆ, ನಾನು  ಸದಾ ಕಾಲ ಕನ್ನಡ ಸಾಹಿತ್ಯದ ಸವಿಯನ್ನು ಸವಿಯುತ್ತ ಕಳೆದು ಬಿಡತ್ತಿದ್ದೆ. ಸುಗಮ ಸಂಗೀತದಲ್ಲಿ ಕನ್ನಡ ಭಾವಗೀತೆ ಕೇಳೋದು ಮತ್ತು  ಕನ್ನಡ ಕಾದಂಬರಿಗಳನ್ನು ಓದುವದು. ಇಷ್ಟಾದರೆ ಅದೇ ನನ್ನ ಸ್ವರ್ಗ. ಆದರೇನು ಮಾಡುವುದು? ಬರೀ ಕುಳಿತು ಓದಲಿಕ್ಕೆ ನಮ್ಮ ಹಿರಿಯರು ನನಗೆ ಕುಡಿಕೆ ಹೊನ್ನ ಕೊಟ್ಟು ಹೊಗಿಲ್ಲವಲ್ಲ.  ಜೀವನ ನಡೆಯಬೇಕಲ್ಲಾ!