Friday, October 4, 2019

ಚೆಲುವು ಬಾಗಿತು

ಸೂರ್ಯಕಾಂತಿ ಹೂವು ಚೆಲುವಾಗಿ ಅರಳಿ ನಿಂತಿದ್ದಳು. ಎಲ್ಲರ ಕಣ್ಮನ ಸೆಳೆಯುತ್ತಿದ್ದಳು. ತನ್ನ ಅಂದಕ್ಕೆ ತಾನೇ ಬೀಗುತ್ತಾ ದಿನಾಲೂ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ತಲೆಯೆತ್ತಿ ಮೆರೆಯುತ್ತಿದ್ದಳು. ತಲೆಯಲ್ಲಿ ಏನೂ ಇಲ್ಲದಿದ್ದರೂ ಅಂದವೊಂದೇ ನನ್ನ ಆಸ್ತಿ, ಅಷ್ಟೇ ಸಾಕು ಮಿಕ್ಕಿದ್ದೆಲ್ಲ ಮಿಥ್ಯ, ಎಲ್ಲರೂ ನನ್ನ ನೋಡಿ ನಾಚಬೇಕು ಎಂದು ನುಲಿಯುತ್ತಿದ್ದಳು. ವೈಯಾರದ ಅವಳ ನಡುವಳಿಕೆ ದಿನೇ ದಿನೇ  ಹೆಚ್ಚುತ್ತಲೇ ಇತ್ತು. ಎಲ್ಲರನ್ನೂ ಮೋಹಿಸುತ್ತಿದ್ದಳು. ಬೆಳಿತಾ ಬೆಳಿತಾ ಅವಳು ಎತ್ತರ ಎತ್ತರವಾಗುತ್ತಾ ಹೋದಳು. ಅವಳು ಸದಾ ಸೂರ್ಯ ದೇವನನ್ನು ಏಕಚಿತ್ತದಿಂದ ಬಿಟ್ಟ ಕಣ್ಣಿನಿಂದ ನೋಡುತ್ತಲೇ ಇರುವುದನ್ನು ಕಂಡ ಜನ, ವಿಸ್ಮಯಗೊಂಡಿದ್ದರು. 'ಬೇರೆ ಹೂವುಗಳಲ್ಲಿ ಇಲ್ಲದ ಛಲ, ಇವಳಲ್ಲಿ ಹೇಗಿದೆ' ಎಂದು ಬೆರಗಾಗಿದ್ದರು. ಇವಳು ನೆಟ್ಟ ನೋಟ ಬಿಡದೇ ಸೂರ್ಯನನ್ನು ನೋಡುವುದನ್ನು ಗಮನಿಸಿದವರು, ಇವಳು ಸೂರ್ಯನನ್ನೇ ಹಿಂಬಾಲಿಸುತ್ತಿದ್ದಾಳೆ ಎಂದು ಊಹಿಸಿದ್ದರು. ಅವಳೋ ಸೂರ್ಯನ್ನೇನು ನೋಡುತ್ತೀರಿ, ನನ್ನ ನೋಡಿ ಎಂದು ಕೊಚ್ಚಿಕೊಲ್ಲುತ್ತಿದ್ದಳು. ಆದರೆ ಸೂರ್ಯ ದಿನಾಲೂ ಮೇಲಿನಿಂದ ಇವಳನ್ನು ನೋಡಿ ನಿರಾತಂಕದಿಂದ ಸುಮ್ಮನೆ ಮುಗುಳ್ನಗುತ್ತಿದ್ದ. ಅವನಿಗೆ ತನ್ನ ಶಕ್ತಿ ಪರಾಕ್ರಮದ ಅರಿವಿದ್ದರೂ ಜಂಭವಿರಲಿಲ್ಲ. ಯಾಕೆಂದರೆ  ಅವನ ಹಿರಿತನಕ್ಕೆ ಅವನಿಗೆ ಜ್ಞಾನ ಕೂಡ ಹಿರಿದಾಗಿತ್ತು. ತನ್ನ ಇತಿಮಿತಿಗಳನ್ನು ಅವನು ಅರಿತಿದ್ದ.  ಅವನಿಗೆ ಮಹತ್ತಾದ ಮೇಘರಾಜನ ಆಟಗಳು ಗೊತ್ತಿದ್ದವು. ನನ್ನ ಕಿರಣಗಳನ್ನು ಅಡ್ಡಗಟ್ಟಿ ನನ್ನನ್ನೇ ಮಂಕುಕವಿಯುವಂತೆ ಮೇಘ ಮಾಡುತ್ತಾನೆ ಅಂತ ತಿಳಿದಿದ್ದ. ಇನ್ನು ಚಂದ್ರ, ತನ್ನಿಂದಾನೇ ಬೆಳಕು ಪಡೆದು ತನಗೆಯೇ ತಿರುಗಿ ಗ್ರಹಣ ಹಿಡಿಸಿ ವಸುಂಧರೆಯ ನೋಡದಂತೆ ಮಾಡುತ್ತಾನೆ ಎಂದು ಅರಿತಿದ್ದ. ಜಗಕ್ಕೆ ಶಕ್ತಿ ಕೊಡುವ ನನಗೆಯೇ ಕೆಲವರು ಅಡ್ಡಗಾಲು ಹಾಕುವಾಗ ನಾನು ನನ್ನ ಮಿತಿಯಲ್ಲಿ ಇರಬೇಕು ಎಂದು ಕಲಿತಿದ್ದ. ವಿನಮ್ರದಿಂದ ಸದಾ ತನ್ನ ಕೆಲಸ ತಾನು ಮಾಡುತ್ತಿದ್ದ.

ಅಂದಗಾತಿ ಸೂರ್ಯಕಾಂತಿ ಹೂವು ಇನ್ನೂ ಎಳಸು, ಜಗದ ನಿಯಮ ತಿಳಿದಿಲ್ಲ, ಜ್ಞಾನದ ಬಲ ಗೊತ್ತಿಲ್ಲ. ಅದಕ್ಕೆ ಗುರುವಿನ ರೂಪದಲ್ಲಿ ಯಾರೂ ಬಂದು ಇನ್ನು ಜ್ಞಾನ ಮೊಳೆಯುವಂತೆ ಮಾಡಿರಲಿಲ್ಲ. ಆದರೆ ಎಲ್ಲಾ ವಿಧಿ ಲಿಖಿತವೆಂಬಂತೆ ಭ್ರಮರ ಗುರುವಾಗಿ ಹೂವಿನ ಹತ್ತಿರ ಬಂದ. ಭ್ರಮರನು ನಿರ್ಲಿಪ್ತ ಗುಣದ ಅಲೆಮಾರಿ. ಯಾರು ತನ್ನ ಗಾನ ಕೆಳತ್ತಾರೋ ಇಲ್ಲವೋ ಎಂದು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೇ ಸದಾ ತನ್ನ ನಾದದಲ್ಲಿ ಗುನುಗುತ್ತ ಅಲೆಯುತ್ತಿದ್ದ. ಯಾರ ಪರಿವೆಯೇ ಇಲ್ಲದೆ ಸದಾ ನಿಶ್ಚಿಂತೆಯಿಂದ ತನ್ನಿಷ್ಟದಂತೆ ಹಾರಾಡುತ್ತಿದ್ದ. ಅವನಿಗೆ ಅಂದವಿಲ್ಲ ಆದರೂ, ಜ್ಞಾನ ಮೊಳೆಸುವಂಥ ಕಲೆಯಿದೆ. ಈಗ ಅವನಿಗೆ ತನ್ನ ಧರ್ಮಾಧಾರಿತ ಕೆಲಸದ ಸಮಯ ಬಂದಿತ್ತು. ಗುರುವಾಗಿ ಹೂವಿನ ತಲೆಯ ಮೇಲೆಯೇ ಕುಳಿತು ಪಾಠ ಹೇಳಿಕೊಡಬೇಕಾಗಿತ್ತು. ಅಂದಕ್ಕೆ ಬೆಲೆ ಅಲ್ಪ ಆದರೆ ಶಕ್ತಿಗೆ, ಯುಕ್ತಿಗೆ ಬಲವುಂಟು, ದೀರ್ಘ ಬಾಳಿಕೆಯುಂಟು ಎಂದು ಜ್ಞಾನದ ಬೀಜ ಸೂರ್ಯಕಾಂತಿಯಲ್ಲಿ ಮೂಡುವಂತೆ ಮಾಡಿದ. ಅದೇ ಸಮಯಕ್ಕೆ ಸೂರ್ಯನೂ ಸೂರ್ಯಕಾಂತಿ ಹೂವಿನಲ್ಲಿರುವ ಬೀಜಗಳನ್ನು ಬಲವಾಗುವಂತೆ ಮಾಡಿದ. ಕೀಟಗಳು ಬಾಧಿಸದಂತೆ ತಡೆದು ಹದವಾದ ವಾತಾವರಣ ನಿರ್ಮಿಸಿದ. ಹೂವು ಕೂಡ ಚಿತ್ತಾರವಾಗಿ ಚೊಕ್ಕಟ್ಟಾಗಿ ಬೀಜಗಳನ್ನು ಜೋಡಿಸಿಕೊಳ್ಳುತ್ತ ಅಂದದ ಕಡೆಗೆ ಕಡಿಮೆ ಗಮನ  ಹರಿಸಿದಳು. ಬೀಜಗಳು ಗಟ್ಟಿಯಾದಂತೆ ಹೂವು ಮಾಗಿತು. ಈಗ ಪ್ರೌಢಳಾಗಿ ಸೂರ್ಯನನ್ನು ದಿಟ್ಟಿಸದೇ ನಮಿಸುವಂತೆ  ತಲೆ ತಗ್ಗಿಸಿದಳು. ಮುಂಚೆ ಪಟ್ಟ ಜಂಭಕ್ಕೆ ತಾನೇ ನಾಚಿ ತಲೆ ಬಗ್ಗಿಸಿದಳು. ರೈತನು ಅವಳು ಬಿಟ್ಞ ಜ್ಞಾನದ ಬೀಜಕ್ಕೆ ನಮಿಸಿ, ಪೂಜಿಸಿ ಬೆಲೆಕೊಟ್ಟ.

Monday, July 15, 2019

ಕರ್ಮ ಮತ್ತು ಫಲ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ, ಅವನು ಬ್ರಾಹ್ಮಣರಿಗೆ ಅನ್ನದಾನ ಮಾಡುತ್ತಿದ್ದ. ಹೀಗೆಯೇ ಒಮ್ಮೆ ಸ್ವತಃ ತಾನೇ ನಿಂತು ಅನ್ನದಾನ ಮಾಡುವಾಗ, ಆಕಾಶದಲ್ಲಿ ಒಂದು ಹದ್ದು ತನ್ನ ಕಾಲಲ್ಲಿ ಸತ್ತ ವಿಷಸರ್ಪವನ್ನು ಹಿಡಿದು ಕೊಂಡು ಹಾರಿಕೊಂಡು ಹೋಗುತ್ತಿತ್ತು. ಆ ಘಳಿಗೆಯಲ್ಲಿ ಸರ್ಪದ ಬಾಯಿಯಿಂದ ಒಂದು ತೊಟ್ಟು ವಿಷ ವಸರಿತು, ಅದು ನೇರವಾಗಿ ರಾಜನು ನೀಡುತ್ತಿದ್ದ ಅನ್ನದಲ್ಲಿ ಬಿದ್ದಿತು. ಎಲ್ಲರ ನೋಟ ರಾಜ ಮತ್ತು ಊಟದ ಕಡೆಗೆ ಇದ್ದುದರಿಂದ ಇದನ್ನು ಯಾರೂ ಗಮನಿಸಲಿಲ್ಲ. 
ರಾಜ ಊಟ ಬಡಿಸುವುದನ್ನು ಹಾಗೆಯೇ ಮುಂದುವರಿಸಿದ. ಯಾವ ಬ್ರಾಹ್ಮಣನ ತಟ್ಟೆಯಲ್ಲಿ ಆ ಹಾವಿನ ವಿಷದ ಅನ್ನ ಬಂದಿತ್ತೋ, ಅವನು ವಿಷಪ್ರಾಶನದಿಂದ ತೀರಿಕೊಂಡ.  ರಾಜನಿಗೆ ಈ ವಿಷಯ ತಿಳಿದು ತುಂಬಾ
ಖೇದವಾಯಿತು. ಅವನ  ಮನಸ್ಸು ತುಂಬಾ ನೋಯಿತು. 

ಪಾಪ -ಪುಣ್ಯ, ಕರ್ಮಗಳ ಲೆಕ್ಕಯಿಡುವ ಯಮಲೋಕದ ಚಿತ್ರಗುಪ್ತನಿಗೆ ಈಗ ದಿಗಿಲು ಹಿಡಿಯಿತು. ಇಲ್ಲಿ ಘಟಿಸಿದ ಪಾಪ ಕರ್ಮದ ಫಲವು ಯಾರಿಗೆ ಸೇರಿದ್ದು ಅನ್ನುವದು ಅವನಿಗೆ ಗೊತ್ತಾಗಲಿಲ್ಲ. ಯಾಕೆಂದರೆ,  ರಾಜ ಗೊತ್ತಾಗದೆ ವಿಷದ ಅನ್ನವನ್ನು ಬಡಿಸಿದ್ದ. ಹಾವಂತೂ ಸತ್ತು ಹೋಗಿತ್ತು, ಅದೂ ಕೂಡ ಬೇಕು ಬೇಕಂತಲೇ ವಿಷವನ್ನು ಕಾರಲಿಲ್ಲ. ಇನ್ನು ಹದ್ದು ತನ್ನ ಆಹಾರವನ್ನು ಎತ್ತಿಕೊಂಡು ಹಾರುತ್ತ ತನ್ನ ನಿತ್ಯದ ಕೆಲಸದಲ್ಲಿ ತೊಡಗಿತ್ತು, ಅದಕ್ಕೂ ಕೂಡ ಪಾಪದ ಹೊರೆಹೊರಿಸಲಾಗದು. ತನ್ನ ತೊಂದರೆಯನ್ನು ಹೇಳಿಕೊಳ್ಳಲು ಅವನು ಯಮರಾಜನ ಹತ್ತಿರ ಹೋದ. ಯಮರಾಜನು ಚಿತ್ರಗುಪ್ತನಿಗೆ "ಸ್ವಲ್ಪ ಸಮಯ ಕಾಯಿರಿ, ಯಾವುದಾದರೂ ಒಂದು ಪರಿಹಾರ ಸಿಕ್ಕೇ ಸಿಗುತ್ತದೆ."  ಎಂದು ಸಮಾಧಾನ ಹೇಳಿದ.
ಸ್ವಲ್ಪ ದಿನಗಳ ನಂತರ ಬೇರೆ ಊರಿನ ಕೆಲವು ಬ್ರಾಹ್ಮಣರು ಈ ಊರಿಗೆ ರಾಜನ ಭೆಟ್ಟಿಯಾಗಲು ಬಂದರು. ದಾರಿಯಲ್ಲಿ ಒಬ್ಬ ಮಹಿಳೆ ಮಡಕೆಗಳನ್ನು ಮಾರುತ್ತ ಕುಳಿತ್ತಿದ್ದಳು. ಅವಳ ಬಳಿಗೆ ಬಂದು ಬ್ರಾಹ್ಮಣರು ಕೇಳಿದರು, "ರಾಜರ ಅರಮನೆಗೆ ದಾರಿ ಯಾವುದು? ನಾವು ಅವರನ್ನು ಹೇಗೆ ಭೆಟ್ಟಿಯಾಗ ಬಹುದು?"
"ಹೀಗೆ ಹೋಗಿ" ಎಂದು ಕೈ ಚಾಚಿ ಅವಳು ದಾರಿ ತೋರಿಸಿ ಬ್ರಾಹ್ಮಣರಿಗೆ ಹೇಳಿದಳು "ಆದರೆ ಎಚ್ಚರದಿಂದಿರಿ, ರಾಜ ಬ್ರಾಹ್ಮಣರನ್ನು ಕೊಲ್ಲಿಸುತ್ತಾನೆ".
ಯಾವಾಗ ಆ ಮಹಿಳೆ ತಪ್ಪಾಗಿ ರಾಜನನ್ನು ನಿಂದಿಸಿದಳೋ ಆ ಘಳಿಗೆಯಲ್ಲಿ ಚಿತ್ರಗುಪ್ತನಿಗೆ ಯಮರಾಜ ಹೇಳಿದ, "ಆ ಪಾಪದ ಫಲವನ್ನು ಈ ಮಹಿಳೆಗೆ ಕೊಡಿ, ಬ್ರಾಹ್ಮಣನ ಸಾವಿನ ಕರ್ಮದ ಫಲ ಇವಳಿಗೆ ಸಿಗಲಿ".

ಒಬ್ಬರ ಪಾಪ ಕೃತ್ಯದ ಬಗ್ಗೆ ಗೊತ್ತಿದ್ದೂ, ನಿಂದಿಸಿದರೆ ಅವರ ಪಾಪ ಕರ್ಮದ ಅರ್ಧ ಫಲ ನಿಂದಿಸಿದವರಿಗೆ ಸಲ್ಲುತ್ತದೆ. ಆದರೆ ಒಬ್ಬರ ಕೃತ್ಯದ ಬಗ್ಗೆ ಸರಿಯಾಗಿ ಗೊತ್ತಿರದೆ, ವೃಥಾ ನಿಂದಿಸಿದರೇ ಅದರ ಪಾಪದ ಫಲ ಸಂಪೂರ್ಣವಾಗಿ ನಿಂದಿಸಿದವರಿಗೆ ಸಲ್ಲುತ್ತದೆ.

Karma and Retribution

The Brahmin who accidentally got the poisoned food from king died, and the king was feeling very sad about it.
Chitragupta, the assistant of Yamaraj who had the job of assigning retribution for karmas to the living beings had a problem now.
When this incident happened with the king, he did not know whom to give the karma to.
After all, it was not the eagle's fault that it had carried the dead snake in its claws (since this was its food), nor was it the dead's snake fault, nor was it the king's fault because he did not know that the poison fell into the food.
So Chitragupta went to Yamaraj for a solution. Yamaraj told him to wait patiently. Soon a solution would present itself, the lord of death assured him.
One day, few other brahmanas entered the kingdom in order to meet the king.
A woman was sitting next to the road, selling wares and they asked her: "Do you know where the king's palace is and how we can get there?"
She said: "Yes," and pointed at the right direction. "But, be very careful," she said, "the king is known to kill brahmanas!"
The moment she said that and criticized the king unrightfully, Chitragupta got his answer.
He decided to give HER the karma for the death of the brahmana!
ನೀತಿ :
If you criticize anyone and you are right about their deeds, you will get half of their bad karma.
But, if you criticize someone and you are not right about their deeds, then you will get 100% of their karma.
So be careful about what you think or say about other people.
- ಶ್ರೀಮದ್ ಭಾಗವತ (5.10.17)